Shravana Masa Karyakrama

shravana masa Dharmika Karyakrama

Shravana Masa samskruthika karyakrama

Shravana Masa samskruthika karyakrama
ನೂತನ ಎರಡನೇ ಬೆಳ್ಳಿ ರಥ ಸಮರ್ಪಣೆ
ದಾನಿಗಳು :- ಶ್ರೀ ಜಿ.ಪ್ರಕಾಶ ಮಯ್ಯ "ಇಂದ್ರಪ್ರಸ್ಥ" ಬೆಂಗಳೂರು
ಬೆಳ್ಳಿ : 62 kg
ಮೌಲ್ಯ : 42 lak

ಶ್ರೀಮತಿ ಮಂಜುಳಾ ಶ್ರೀ ಜಿ ಪ್ರಕಾಶ ಮಯ್ಯ ದಂಪತಿಗಳು

ಪಂಚವಿಂಶತಿ ಕಲಾಶಾಭಿಷೇಕ ಮತ್ತು ನರಸಿಂಹ ಹೋಮ

ಶ್ರೀಗುರುನರಸಿಂಹ ದೇವರಿಗೆ ಅಭಿಷೇಕ

ಶ್ರೀದೇವಳದ ತಂತ್ರಿಗಳಾದ ವೇ.ಮೂ.ಕ್ರಷ್ಣ ಸೊಮಯಾಜಿ ನೇತ್ರತ್ವದಲ್ಲಿ ಬೆಳ್ಳಿರಥ ಪೂಜೆಯ ಮೂಲಕ ಸಮರ್ಪಣೆ
Election 2015
sri gurunarasimha temple saligrama managing commit y election on 29-03-2015 Sunday 8-00 am to 4-00 pm Final List Matakshetra -1 Saligrama
Amarutanna Kuteera, Jalagara & Yagamantapa
ಸಾಲಿಗ್ರಾಮ :- ಶ್ರೀ ಬಿ.ವಾಸುದೇವ ಐತಾಳ ಮತ್ತು ಮಕ್ಕಳು ಶ್ರೀ ಚಂದ್ರಶೇಖರ ಐತಾಳರ ನೇತ್ರತ್ವದಲ್ಲಿ ಅಮ್ರತಾನ್ನ ಕುಟೀರ (ನೈವೇಧ್ಯ ಕೋಣೆ) ನವೀಕರಣಗೊಳಿಸಿ ಶ್ರೀದೇವರಿಗೆ ಸಮರ್ಪಿಸಿದರು. (ಅಂ.ಬೆಲೆ. ರೂ 40,000-00)
ಶ್ರೀ ಬಿ.ನಾರಾಯಣ ಐತಾಳ ಮತ್ತು ಮಕ್ಕಳು ಶ್ರೀ ಬಿ. ಶಿವಕಿರಣ ಐತಾಳರ ನೇತ್ರತ್ವದಲ್ಲಿ ಜಲಾಗಾರ (ಬಾವಿಕಟ್ಟೆ) ಮತ್ತು ಯಾಗಮಂಟಪದ ನವೀಕರಣ ಮಾಡಿ ಶ್ರೀದೇವರಿಗೆ ಸಮರ್ಪಿಸಿದರು. (ಅಂ.ಬೆಲೆ. 40,000-00)
ಶ್ರೀದೇವಳದ ಆಡಳಿತಮಂಡಳಿಯ ಸದಸ್ಯ ಶ್ರೀ ಆನಂತಪದ್ಮನಾಭ ಐತಾಳರು ಈ ಕೊಡುಗೆಯನ್ನು ಸ್ವೀಕರಿಸಿ ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು.
Sri Gurunarasimha Temple :- details of Trustees
ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಉಡುಪಿ ಜಿಲ್ಲೆ - 576225 ಉಡುಪಿ ಜಿಲ್ಲೆ
ಆಡಳಿತ ಮಂಡಳಿ 2010--2015 ಇದರ ಸದಸ್ಯರುಗಳ ಸಂಕ್ಷಿಪ್ತ ವಿವರ
* **** ***** ***** ***** ***** ** * ** ***** ***** ***** ***** ***** *
ಅಧ್ಯಕ್ಷ :- ಶ್ರೀ ಎ. ಜಗದೀಶ ಕಾರಂತ
ಹುಟ್ಟೂರು :- ಉಡುಪಿ ತಾಲೋಕಿನ ಐರೋಡಿ ಗ್ರಾಮ
ತಂದೆ ತಾಯಿ :- ದಿವಂಗತ ಶ್ರೀನಿವಾಸ ಕಾರಂತ ಮತ್ತು ಶಾರದಮ್ಮ ಇವರ ಮಗನಾಗಿ ತುಂಬು ಕುಟುಂಬದಲ್ಲಿ ಜನನ
ಶಿಕ್ಷಣ :- ನ್ಯಾಷನಲ್ ಹೈಸ್ಕೂಲ್ ಬಾರ್ಕೂರನಲ್ಲಿ ಪ್ರೌಢ ಶಿಕ್ಷಣ, ಬಾಲ್ಯದಲ್ಲಿ ನಾಯಕತ್ವದ ಗುಣ - ವಿದ್ಯಾರ್ಥಿ ಮುಂಖಂಡನಾಗಿ ಕಾರ್ಯನಿರ್ವಹಣೆ, ಸಮಾಜ ಸೇವೆಯ ತುಡಿತ ಪಿಯುಸಿಗೆ ಶಿಕ್ಷಣ ಮೊಟಕು
ಜನಸೇವೆಯಲ್ಲಿ ತಮ್ಮನ್ನು ಸಂಪೂರ್ನವಾಗಿ ತೊಂಡಗಿಸಿಕೊಂಡರು, ಶ್ರಮಜೀವಿ - ಆದರ್ಶ ಕ್ರಷಿಕ - ನಿಷ್ಠುರವಾದಿ-- ಸತ್ಯಪ್ರತಿಪಾದಕ
ಸಮಾಜ ಸೇವೆ :-
- 23 ವರ್ಷಗಳ ಸುದೀರ್ಘ ಅವಧಿಯಲ್ಲಿ ಸಾಸ್ತಾನ ಸೇವಾ ಸಹಕಾರಿ ಬ್ಯಾಂಕಿನ ಆಡಳಿತಮಂಡಳಿಯ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, 6 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ - ಬ್ಯಾಂಕಿಗೆ ಭದ್ರ ಬುನಾದಿ
- ಐರೋಡಿ ಮಂಡಲ ಪಂಚಾಯತ್ ಅಧ್ಯಕ್ಷರಾಗಿ 2 ಅವಧಿಗೆ ಸೇವೆ , ಅಧ್ಯಕ್ಷರಾಗಿ ಅನುಪಮ ಸೇವೆ
- ಉಡುಪಿ ಭೂ ಅಭಿವ್ರದ್ಧಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ
- ಬಾರ್ಕೂರಿನ ಕ್ರೆಡಿಟ್ ಕೋಆಪರೇಟೀವ್ ಬ್ಯಾಂಕಿನ ಸ್ಥಾಪಕ ನಿರ್ದೇಶಕ
- ಸಾಸ್ತಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ
- ಅವಿಭಕ್ತ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ , 2 ಬಾರಿ ಅಧ್ಯಕ್ಷರಾಗಿ ಆಯ್ಕೆ- ಈಗಲೂ ನಿದೇಶಕರಾಗಿ ದುಡಿಯುತ್ತಿದ್ದಾರೆ, ಹಾಲು ಉತ್ಪಾದಕರ ಭಿಷ್ಮಾಚಾರ್ಯರೆಂದೇ ಪ್ರಸಿದ್ದಿ
- ಐರೋಡಿ ಶ್ರೀ ಅಣಲಾಡಿ ಮಠದ ಆಡಳಿತ ಮುಕ್ತೇಸರರು
- ಶ್ರೀಗುರುನರಸಿಂಹ ಆಡಳಿತ ಮಂಡಳಿ ಸದಸ್ಯರಾಗಿ , ಉಪಾಧ್ಯಕ್ಷರಾಗಿ, 2010- ರಿಂದ ಅಧ್ಯಕ್ಷರಾಗಿ ದುಡಿಯುತ್ತಿದ್ದಾರೆ
- ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ
- ಚೇತನ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸಕ್ರಿಯ ಸದಸ್ಯರು
- ಕೆ.ಎಂ.ಎಫ್. ಬೆಂಗಳೂರು ಇದರ ರಾಜ್ಯ ನಿರ್ದೇಶಕರಾಗಿ 1 ವರ್ಷದ ಅವಧಿಗೆ ಆಯ್ಕೆ,
- ಸಾಂಸ್ಕ್ರತಿಕ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತರು. ಕಂಬಳದಂತಹ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವಲ್ಲಿ ಸಕ್ರೀಯರು.
- ದೇಶವಿದೇಶಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡು ಜ್ಞಾನಾರ್ಜನೆಯ ತಮ್ಮ ತುಡಿತ, ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಅವರಲ್ಲಿ ನಾವು ಗಮನಿಸಬಹುದಾಗಿದೆ.
ಈ ಎಲ್ಲಾ ಸಾಧನೆಗಳಿಗಾಗಿ ಸಂಘಸಂಸ್ಥೆಗಳಿಂದ ಪಡೆದ ಅಭಿನಂದನೆ, ಪ್ರಶಸ್ತಿ ಹಲವಾರು. ಕರ್ನಾಟಕ ಸರ್ಕಾರದಿಂದ " ಉತ್ತಮ ಸಹಕಾರಿ " ಎಂಬ ಪ್ರಶಸ್ತಿ ಪಾತ್ರಕ್ಕೆ ಭಾಜನ
ಇದೀಗ ಶ್ರೀಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಕಂಕಣ ಬದ್ಧರಾಗಿ ದುಡಿಯುತ್ತಿದ್ದಾರೆ.
PH NO. 0820-2584605, 9972095779
-----------------------------------------------------------------------------------------------
ಉಪಾಧ್ಯಕ್ಷ :- ವರ್ಕಾಡಿ ಭಾಸ್ಕರ ನಾವಡ
ಹುಟ್ಟಿದ ಊರು, ದಿನಾಂಕ :- ವರ್ಕಾಡಿ ದಿನಾಂಕ :- 05-03-1942
ವಿದ್ಯಾರ್ಹತೆ :- ಸಂತ ಎಲ್ಯೋಸೀಯಸ್ ಕಾಲೇಜಿನಲ್ಲಿ ಪದವಿ
ಉದ್ಯೋಗ :- ಆದಿಶ್ರೀ ಕಾವೇರಿ ಬಸ್ ಸರ್ವಿಸನಲ್ಲಿ ಉದ್ಯೋಗ, 1966 ರಲ್ಲಿ ವಿಜಯಾ ಬ್ಯಾಂಕಿಗೆ ಸೇರ್ಪಡೆ, ಹಂತ ಹಂತವಾಗಿ ಮೇಲೇರಿ ಸಿನಿಯರ್ ಮೆನೇಜರ್ ಆಗಿ ವಿ.ಆರ್.ಎಸ್ ನೆಲೆಯಲ್ಲಿ ನಿವ್ರತ್ತಿ.
ಶಿಸ್ತು ಬದ್ದವಾಗಿ ಸಂಸ್ಥೆಯ ಹಿತದ್ರಷ್ಟಿಯಲ್ಲಿ 34 ವರ್ಷಗಳ ಸೇವೆ, ಬ್ಯಾಂಕಿನ ಹಾಗು ವೈಯುಕ್ತಕವಾಗಿ ಭಾರತ ದೇಶದ ಎಲ್ಲಾ ಸ್ಥಳಗಳ ಹಾಗೂ ಅಮೇರಿಕಾ ಸಂದರ್ಶನ.
ಸಮಾಜ ಸೇವೆ :- ವಿಜಯಶ್ರೀ ಕ್ರೆಡಿಟ್ ಸೇವಾ ಸಂಘದ ಸ್ಥಾಪನೆ ಹಾಗೂ ಅಧ್ಯಕ್ಷನಾಗಿ ಸಂಘದ ಪ್ರಗತಿಗಾಗಿ 5 ವರ್ಷ ದುಡಿದ ಅನುಭವ ಇದೀಗ ಸಂಘದ ನಿರ್ದೇಶಕರಾಗಿ ಸೇವೆ.
ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಮಂಗಳೂರು ಅಂಗಸಂಸ್ಥೆಯ ಪದಾಧಿಕಾರಿಯಾಗಿ ಹಾಗೂ ಅಧ್ಯಕ್ಷನಾಗಿ 5 ವರ್ಷಗಳ ಕಾಲ ಸೇವೆ ಕೂಟಬಂಧುಗಳ ಸಂಘಟನೆಗೆ ಹಲವಾರು ಯೋಜನೆಗಳ ಅನುಷ್ಠಾನ ಹಾಗೂ ಆಂಗಸಂಸ್ಥೆಯ ಗೌರವ ಅಧ್ಯಕ್ಷನಾಗಿ ಆಯ್ಕೆ, ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಅಂಗಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಸಹಮತದ ಅಭ್ಯರ್ಥಿಯಾಗಿ ಶ್ರೀಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನಾಗಿ ಸರ್ವಾನುಮತದಿಂದ ಆಯ್ಕೆ. ಇದೀಗ ಆಡಳಿತ ಮಂಡಳಿಯ ಉಪಾಧ್ಯಕ್ಷನಾಗಿ ಆಯ್ಕೆಯಾಗಿ ಕಾರ್ಯನಿರ್ವಹಣೆ
PH NO. 9343560811
-----------------------------------------------------------------------------------------------
ಕಾರ್ಯದರ್ಶಿ :- ಶ್ರೀ ಆನಂದರಾಮ ಮಧ್ಯಸ್ತ,
ತಂದೆಯ ಹೆಸರು :- ದಿ. ಪಾ ಶ್ರೀನಿವಾಸ ಮಧ್ಯಸ್ತ
ತಾಯಿಯ ಹೆಸರು :- ದಿ ಗಿರಿಜಮ್ಮ
ಹುಟ್ಟಿದ ಸ್ಥಳ :- ಪಾರಂಪಳ್ಳಿ ಗ್ರಾಮ, ಸಾಲಿಗ್ರಾಮ
ಹುಟ್ಟಿದ ದಿನಾಂಕ :- 13-05-1947
ವಿದ್ಯೆ : - BA (ಸಹ್ಯಾದ್ರಿ ಕಾಲೇಜ ಶಿವಮೊಗ್ಗ)
ವ್ರತ್ತಿ :- ಪ್ರೌಢ ಶಾಲೆ ಶಿಕ್ಷಕನಾಗಿ ವ್ರತ್ತಿ ಪ್ರಾರಂಭ, ನಂತರ ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ಸೇರಿ ತಹಶೀಲ್ದರನಾಗಿ ಸೇವೆ ಸಲ್ಲಿಸಿ 31-05-2005 ರಂದು ಶೀರಾದಲ್ಲಿ ಸೇವೆಯಿಂದ ನಿವ್ರತ್ತಿ.
ಪುರಸ್ಕಾರ :- 2011ನೇ ಇಸವಿಯಲ್ಲಿ ನಡೆದ ರಾಷ್ಟ್ರೀಯ ಜನಗಣತಿಯಲ್ಲಿ ರಾಷ್ಟ್ರಪತಿಗಳ ಬೆಳ್ಳಿ ಪದಕ ಪುರಸ್ಕ್ರತ
ವಿಳಾಸ :- ಆನಂದರಾಮ ಮಧ್ಯಸ್ತ, "ಶ್ರೀಗಿರ ಭಾಸ್ಕರ" ಪಾರಂಪಳ್ಳಿ ಗ್ರಾಮ ಮತ್ತು ಅಂಚೆ, ಸಾಲಿಗ್ರಾಮ 576225, ಉಡುಪಿ ಜಿಲ್ಲೆ ಮತ್ತು ತಾಲೂಕು. ದೂರವಾಣಿ :- 0820-2565105, 9448213634
-----------------------------------------------------------------------------------------------
ಕೋಶಾಧಿಕಾರಿ :- ವೈ ಸದಾರಾಮ ಹೇರ್ಳೆ
ಉಡುಪಿ ತಾಲೂಕುನ ಕೋಟ ಹೋಬಳಿಯ, ಮುಡಹಡು ಗ್ರಾಮದ, "ಮುಂಡಾಸು ಹೇರ್ಳೆ" ಎಂದೇ ಪ್ರಸಿದ್ಧಿ ಪಡೆದ ಎಡಬೆಟ್ಟು ಹೇರ್ಳೆ ಮನೆತನದ ದಿವಂಗತ ಮರಿಯಪ್ಪ ಹೇರ್ಳೆ ಮತ್ತು ಮುಕಾಂಬಿಕಾಮ್ಮ ದಂಪತಿಗಳ ಸುಪುತ್ರರಾಗಿ 22-3-1958 ರಲ್ಲಿ ಜನನ
ಹುಟ್ಟೂರಿನ ವಿದ್ಯೋದಯ ಹಿರಿಯ ಪ್ರಾಥಮಿಕ ಶಿಕ್ಷಣ ನಂತರ ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವದ ಶಿಕ್ಷಣ ಮತ್ತು ಭಂಡಾರಕಾರಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಶಿಕ್ಷಣ ಪೂರೈಸಿ 1982 ರಲ್ಲಿ ಪ್ರತಿಷ್ಟಿತ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ವ್ರತ್ತಿಪರ ಬದುಕು ಆರಂಭ ಹಂತ ಹಂತವಾಗಿ ಪದನ್ನೋತಿ ಹೊಂದಿ, ಪ್ರಸ್ತುತ ಆಸ್ಪತ್ರೆಯ ಹಣಕಾಸು ವಿಭಾಗದಲ್ಲಿ ಹಿರಿಯ ಅಧಿಕಾರಿಯಾಗಿ (ಸಿನಿಯರ್ ಆಫೀಸರ್) ನಿಯುಕ್ತಿ,
ಪ್ರಕ್ರತ ಮಣಿಪಾಲದ ಸಪ್ತಗಿರಿ ನಗರದಲ್ಲಿರುವ ಸ್ವಗ್ರಹದಲ್ಲಿ ಪತ್ನಿ ಶ್ರೀಮತಿ ವಿನೋದ ಹೇರ್ಳೆ ಹಾಗೂ ಇಬ್ಬರು ಮಕ್ಕಳೊಂದಿಗೆ ಖಾಯಂ ನಿವಾಸ
ಸಮಾಜ ಸೇವೆ - ವಿವಿಧ ಸಂಘ ಚಟುವಟಿಕೆಗಳ ಪರಿಚಯ :
- ಸಾಸ್ತಾನ ಮಂಡಲ ಪಂಚಾಯತ್ ಸದಸ್ಯರಾಗಿ ಸತತ ಐದು ವರ್ಷಗಳ ಸೇವೆ.
- ಸಾಸ್ತಾನ ಸಹಕಾರಿ ಬ್ಯಾಂಕಿನ ನಿರ್ದೇಶಕ ಹಾಗೂ ಉಪಾಧ್ಯಕ್ಷರಾಗಿ ಸುಮಾರು ಎರಡು ದಶಕಗಳ ನಿರಂತರ ಸೇವೆ.
- ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಹಿಂದಿನ ವಿದ್ಯಾರ್ಥಿಸಂಘದ ಸದಸ್ಯ ಹಾಗೂ ತದ ನಂತರ ಅಧ್ಯಕ್ಷರಾಗಿ 3 ವರ್ಷಗಳ ಸೇವೆ.
- ಸಾಲಿಗ್ರಾಮ ಕಿನಾರಾ ಸರ್ವೀಸ್ ಕೋಆಪರೆಟೀವ್ ಸೊಸೈಟಿಯ ಸ್ಥಾಪಕ ನಿರ್ದೇಶಕ
- ಪ್ರಸನ್ನ ಗಣಪತಿ ದೇವಸ್ಥಾನ, ಹುಡ್ಕೋ ಕಾಲನಿ ಮಣಿಪಾಲ - ಇದರ ಒಬ್ಬ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ.
- ಮಣಿಪಾಲ ಮಾಧವ ಕ್ರಪಾ ಆಂಗ್ಲ ಮಾಧ್ಯಮ ಶಾಲೆಯ, ಹಾಗೂ ಮಣಿಪಾಲ ಪದವಿಪೂರ್ವ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ 6 ವರ್ಷಗಳ ಸೇವೆ
- ಮಣಿಪಾಲದ ಸಪ್ತಗಿರಿ ನಿವೇಶನದಾರರ ಸಂಘದ ಅಧ್ಯಕ್ಷರಾಗಿ ಸೇವೆ
- ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಇದರ ಉಡುಪಿ ಅಂಗಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಹಾಗೂ ತದನಂತರದಲ್ಲಿ ಒಂದು ಅವಧಿಯ ಅಧ್ಯಕ್ಷರಾಗಿ ಸೇವೆ
ಪ್ರಶಸ್ತಿ :- " ಉತ್ಕ್ರಷ್ಟ ಸಮಾಜ ಸೇವೆಗಾಗಿ ನವದೆಹಲಿಯ ಅಂತರಾಷ್ಟ್ರೀಯ ಅಧ್ಯಯನ ಸಂಸ್ಥಾನವು 2002 ನೇ ವರ್ಷದ " ರಾಜೀವ ಗಾಂಧಿ ಉತ್ಕ್ರಷ್ಟತಾ ಪ್ರಶಸ್ತಿ ಹಾಗೂ ಸ್ವರ್ಣಪದಕ " ದಿಂದ ಪುರಸ್ಕ್ರತ.
PH NO. 9448724164
------------------------------------------------------------------------------------------
ಸದಸ್ಯ : - ಎನ್ ಕ್ರಷ್ಣ ಹೊಳ್ಳ
ಸಮಾಜದ ಅಭಿವ್ರದ್ಧಿಯಲ್ಲಿ ಗಣನೀಯವಾದ ಸೇವೆಗೈದು ಧಾರ್ಮಿಕ ಹಾಗು ಸಾಂಸ್ಕ್ರತಿಕ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ವ್ಯಕ್ತಿತ್ವ ಎನ್ ಕ್ರಷ್ಣ ಹೊಳ್ಳ ಅವರದು. ನೀರಾಳ ಗೋಪಾಲಕ್ರಷ್ಣ ಹೊಳ್ಳ ಹಾಗು ಕಾಶ್ಯಮ್ಮ ದಂಪತಿಗಳ ಸುಪುತ್ರನಾಗಿ 30-11-1953 ರಲ್ಲಿ ಕಾಸರಗೋಡಿನ ಸಮೀಪದ ನೀರಾಳದಲ್ಲಿ ಜನಿಸಿದರು.
ಕಾಸರಗೋಡಿನ ಬಿ.ಇ.ಎಂ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸವನ್ನು ಪೂರ್ತಿಗೊಳಸಿದ ಇವರು ಕುಟುಂಬದ ಭಾರವನ್ನು ನಿರ್ವಹಿಸಬೇಕಾಗಿ ಬಂದುದರಿಂದ ಕ್ರಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಬಸ್ಸೊಂದನ್ನು ಖರೀದಿಸಿದರು ಇದನ್ನು ಯಶಸ್ವಿಯಗಿ ಮುನ್ನಡೆಸಿಕೊಂಡು ಇವರು ಇದೀಗ 3 ಬಸ್ಸುಗಳನ್ನು ಹೊಂದಿರುತ್ತಾರೆ.
ಕಾಸರಗೋಡು ಜಿಲ್ಲಾ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳಾಗಿಯು ಪ್ರಸ್ತುತ ಇದರ ಜತೆ ಕಾರ್ಯದರ್ಶಿಯಾಗಿಯು ಇವರು ಕಾರ್ಯನಿರ್ವಹಿಸುತ್ತಿದ್ದಾರೆ.
ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಇದರ ಕಾಸರಗೋಡು ಅಂಗಸಂಸ್ಥೆಯ ಪದಾಧಿಕಾರಿಗಳಾಗಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಕಳೆದ 9 ವರ್ಷಗಳಿಂದ ಇದರ ಅಧ್ಯಕ್ಷರಾಗಿ ಸುತರ್ಹವಾದ ಸೇವೆಸಲ್ಲಿಸುತ್ತಿದ್ದಾರೆ. ಈ ಪ್ರದೇಶದ ಸಮಾಜ ಬಾಂಧವರನ್ನು ಸಂಘಟಿಸಿ, ಜಾಗ್ರತಿಯನ್ನು ಮುಡಿಸುವಲ್ಲಿ ಯಶಸ್ವಿಯಾದ ಇವರ ನೇತ್ರತ್ವದಲ್ಲಿ ಕಳೆದ ದಶಂಬರ ತಿಂಗಳಲ್ಲಿ ಕಾಸರಗೋಡು ಅಂಗಸಂಸ್ಥೆಯ ಬೆಳ್ಳಿ ಹಬ್ಬವು ಬಹಳ ವಿಜ್ರಂಭಣೆಯಿಂದ ಆಚರಿಸಲ್ಪಟ್ಟಿತು. ಮಂಜೇಶ್ವರದ ಶ್ರೀಗುರುನರಸಿಂಹ ದತ್ತಿಮಂಡಳಿಯ ಉಪಾಧ್ಯಕ್ಷರಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಸರಗೋಡು ಪರಿಸರದ ವಿವಿಧ ದೇವಾಲಯದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯು, ಕಾರ್ಯದರ್ಶಿಗಳಾಗಿಯು, ಕಾರ್ಯನಿರ್ವಹಿಸುತ್ತಿದ್ದಾರೆ. ಪುಳ್ಕೂರು ಶ್ರೀಮಹಾಲಿಂಗೇಶ್ವರ ದೇವಾಲಯ, ಬೆದ್ರಡ್ಕದ ಪ್ರಮಾಣಿ ಕಿನ್ನಿಮಾಣಿ ದೇವಸ್ಥಾನ, ದೇಶಮಂಗಲದ ಕುಟ್ಟಿಚ್ಛಾತ ಶಂಕರನಾರಾಯಣ ದೇವಾಲಯವು ಇವುಗಳಲ್ಲಿ ಪ್ರಮುಖವಾದದು.
ಆರು ಜನ ಸಹೋದರರು ಹಾಗೂ 3 ಜನ ಸಹೋದರಿಯರನ್ನೊಳಗೊಂಡ ತುಂಬು ಸಂಸಾರ ಇವರದ್ದು, ಇವರ ಧರ್ಮಪತ್ನಿ ಯಶೋದ ಪಾವೂರಿನ ಶ್ರೀರಾಮಕ್ರಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ, ಮಗಳು ಕ್ರಪಾ ಹೊಳ್ಳ ವಿದ್ಯಾರ್ಥಿನಿ.
PH. NO. 09495534763
-----------------------------------------------------------------------------------------------
Narasimha Jayanthi
ದಿನಾಂಕ 16-05-2011 ರಂದು ಶ್ರೀದೇವಳದಲ್ಲಿ ನರಸಿಂಹ ಜಯಂತಿಯು ಸಂಭ್ರಮದಿಂದ ಆಚರಿಸಲ್ಪಟ್ಟಿತು. ಬೆಳಗಿನಿಂದಲೇ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು. , ಬೆಳಿಗ್ಗೆ ಸಂಹಿತಾಭಿಷೇಕ, ನರಸಿಂಹ ಹೋಮಗಳು ವಿಧಿವತ್ತಾಗಿ ನಡೆದವು,
ಸಂಜೆ 6--00 ಗಂಟೆಗೆ ಪಂಚಾಮ್ರತ ಸಹಿತ ವಿಶೇಷ ಪೂಜೆ ಓಲಗ ಮಂಟಪದಲ್ಲಿ ಅಷ್ಟಾವಧಾನ ಸೇವೆಗಳು ಶಾಸ್ತ್ರೋಕ್ತವಾಗಿ ನಡೆದವು ,ಅಪಾರ ಸಂಖ್ಯೆಯಲ್ಲಿ ನೆರೆದ ಜನರಿಗೆ ಪಾನಕ ಪನೀವಾರವನ್ನು ವಿತರಿಸಲಾಯಿತು.
ರಾತ್ರಿ 8-00 ಗಂಟೆಗೆ ಹಿರಿರಂಗಪೂಜೆ, ಉತ್ಸವ ಬಲಿ, ಪುಷ್ಫರಥೋತ್ಸವ, ನಡೆದು ಮಂತ್ರಾಕ್ಷತೆಯೊಂದಿಗೆ ಉತ್ಸವಕ್ಕೆ ಮಂಗಲ ಹಾಡಲಾಯಿತು.
Vana Mahostava
ಹಸಿರು ವನ ಉಳಿಸಿ ಬೆಳೆಸುವ ಸದುದ್ದೇಶದಿಂದ ಶ್ರೀದೇವಳದ ಆಡಳಿತ ಮಂಡಳಿಯು ಶ್ರೀದೇವಳದ ಒಡೆತನದ ಬೋಳಾಗಿದ್ದ ದೇವರ ಹಾಡಿಯಲ್ಲಿ 1,000 ಗಾಳೀ ಸಸಿಗಳನ್ನು ನೆಡುವುದರ ಮೂಲಕ ವನ ಮಹೋತ್ಸವನ್ನು ದಿನಾಂಕ 7.08.2010 ಶನಿವಾರದಂದು ಪೂರ್ವಾಹ್ನ ಸರಳವಾಗಿ ಆಚರಿಸಿತು. ಜನರಲ್ಲಿ ಹಸಿರೇ ಉಸಿರು ಎನ್ನುವ ಪ್ರಜ್ಞೆ ಮೂಡುವಂತಾದರೆ ಆಡಳಿತ ಮಂಡಳಿಯ ಶ್ರಮ ಸಾರ್ಥಕವಾಗುತ್ತದೆ. ಈ ವನವನ್ನು ಉಳಿಸಿ ಬೆಳೆಸುವಲ್ಲಿ ಸ್ಥಳೀಯರ ಸಹಕಾರವನ್ನು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎ. ಜಗದೀಶ ಕಾರಂತರು ಬಯಸಿದರು.